ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ
ಕೆ. ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.
ಸಂಘದ ಸದಸ್ಯರ ಮಕ್ಕಳಿಗೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಹಾಗೂ ಅದಕ್ಕಿಂತ ಹೆಚ್ಚು ಅಂಕ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ 2024-25ನೇ ಸಾಲಿನಲ್ಲಿ ಪಿ.ಯು.ಸಿ ಉತ್ತೀರ್ಣರಾಗಿ, 2025-26ನೇ ಶೈಕ್ಷಣಿಕ ಸಾಲಿನಲ್ಲಿ MBBS / BDS / AYUSH ಪದವಿ / ಸ್ನಾತಕೋತ್ತರ ಪದವಿಗೆ ನೀಟ್ ಪರೀಕ್ಷೆಯ ಮುಖೇನ ಮತ್ತು ಇಂಜಿನಿಯರಿಂಗ್ / Agricultural / Fisheries / Veterinary ಪದವಿ / ಸ್ನಾತಕೋತ್ತರ ಪದವಿಗೆ ರಾಜ್ಯ ಸಿ.ಇ.ಟಿ. ಪರೀಕ್ಷೆ ಮುಖೇನ ಸರಕಾರಿ ಕಾಲೇಜಿನಲ್ಲಿ ಎಡ್ಮಿಶನ್ ಪಡೆದ ವಿದ್ಯಾರ್ಥಿಗಳು ಹಾಗೂ ಕಾನೂನು ಪದವಿಯನ್ನು CLET ಪರೀಕ್ಷೆ ಮುಖೇನ National Law ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ ಎಡ್ಮಿಶನ್ ಪಡೆದ ವಿದ್ಯಾರ್ಥಿಗಳಿಂದ ಅಲ್ಲದೆ ಎಂ.ಎ/ಎಂ.ಕಾಂ./ಎಂ.ಬಿ.ಎ/ಎಂ.ಎಸ್.ಎಸ್ಸಿ/ಎಂ.ಇಡಿ ಪದವಿಯಲ್ಲಿ, ಪಾಲಿಟೆಕ್ನಿಕ್ ಡಿಪ್ಲೊಮಾ /ಐ.ಟಿ.ಐ/ಬಿ.ಪಿ.ಇ.ಡಿ/ಬಿ.ಇ.ಡಿ./ಡಿ.ಇ.ಡಿ ಕೋರ್ಸ್ ಗಳಲ್ಲಿ ಮತ್ತು ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ ಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರದ ಅರ್ಜಿ ಕರೆಯಲಾಗಿದೆ.
ಪ್ರತಿಭಾ ಪುರಸ್ಕಾರದ ವಿವರಗಳು ಹಾಗೂ ಅರ್ಜಿಗಳು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಮತ್ತು ಸಂಘದ ಅಧಿಕೃತ ವೆಬ್ಸೈಟ್ https://ramakrishnacredit.com/applications/ ನಲ್ಲಿ ಲಭ್ಯವಿದ್ದು ಜುಲೈ 15, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
| ELIGIBILTY CRITERIA |
| I. 2024-25ನೇ ಸಾಲಿಗೆ ಸಂಘದ ಸದಸ್ಯರ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರದ ಮಾನದಂಡಗಳು ಈ ಕೆಳಗಿನಂತಿದೆ :- 1. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗರಿಷ್ಟ ಶೇ.95 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು. 2. ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು. II. 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಶಿಕ್ಷಣ ಪೂರೈಸಿ 2025-26ನೇ ಸಾಲಿನಲ್ಲಿ ವೃತ್ತಿಪರ ಪದವಿ/ ಸ್ನಾತಕೋತ್ತರ/ ಇತರ ಪದವಿ/ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್ಗಳವ್ಯಾಸಂಗ ಮಾಡುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಿ ಅದರ ಮಾನದಂಡವನ್ನು ಈ ಕೆಳಗಿನಂತೆ ನಿಗದಿಪಡಿಸಲಾಯಿತು. 1. ಎಂ.ಬಿ.ಬಿ.ಎಸ್/ಬಿಡಿಎಸ್/ಆಯುಷ್ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಷ್ಟ್ರೀಯ NEET ಪರೀಕ್ಷೆ ಮುಖೇನ, ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ Admission ಪಡೆದ ವಿದ್ಯಾರ್ಥಿಗಳು. 2. ಇಂಜಿನಿಯರಿಂಗ್ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಜ್ಯ ಮತ್ತು ರಾಷ್ಟ್ರೀಯ ಪ್ರವೇಶ ಪರೀಕ್ಷೆ (CET/JEE) ಪರೀಕ್ಷೆ ಮುಖೇನ, ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ Admission ಪಡೆದ ವಿದ್ಯಾರ್ಥಿಗಳು. 3. ಹಾಗೂ ಡಿಪ್ಲೊಮಾ ನಂತರ ಇಂಜಿನಿಯರಿAಗ್ ಪದವಿಯ ವ್ಯಾಸಂಗವನ್ನು ರಾಜ್ಯ CET ಪರೀಕ್ಷೆ ಮುಖೇನ, ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ Admission ಪಡೆದ ವಿದ್ಯಾರ್ಥಿಗಳು. 4. ಅಗ್ರಿಕಲ್ಚರಲ್/ಫಿಶರೀಶ್ ಮತ್ತು ವೆಟರ್ನರಿ ಪದವಿ/ಸ್ನಾತಕ್ಕೋತ್ತರ ಪದವಿ ರಾಜ್ಯ CET ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ Admission ಪಡೆದ ವಿದ್ಯಾರ್ಥಿಗಳು. 5. ಕಾನೂನು ಪದವಿ ವ್ಯಾಸಂಗವನ್ನು CLET ಪರೀಕ್ಷೆ ಮುಖೇನ National Law ಕಾಲೇಜುಗಳಲ್ಲಿ ಮೆರಿಟ್ ಸೀಟ್ನಲ್ಲಿ Admission ಪಡೆದ ವಿದ್ಯಾರ್ಥಿಗಳು. 6. ಎಂ.ಎ/ಎಂ.ಕಾಂ./ಎಂ.ಬಿ.ಎ/ಎಂ.ಎಸ್.ಎಸ್ಸಿ/ಎಂ.ಇಡಿ ಪದವಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದವರು. 7. ಪಾಲಿಟೆಕ್ನಿಕ್ ಡಿಪ್ಲೊಮಾ /ಐ.ಟಿ.ಐ/ಬಿ.ಪಿ.ಇ.ಡಿ/ಬಿ.ಇ.ಡಿ./ಡಿ.ಇ.ಡಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದವರು. 8. ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ ಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದವರು. |